Thursday, July 17, 2014

ರಕ್ತ ಶುದ್ಧಿಗೊಂದು ಹಿತ್ತಲ ಸಂಜೀವಿನಿ



ದಾಸವಾಳ

ಮಾನವನ ರಕ್ತ ತ್ವರಿತಗತಿಯಲ್ಲಿ ಶುದ್ಧ ಮಾಡುವ ಏಕೈಕ ಸಸ್ಯ ಸಂಜೀವಿನಿ ಅದು ನಮ್ಮ ನಿಮ್ಮ ಮನೆ ಹಿತ್ತಲಲ್ಲಿ ಖರ್ಚಿಲ್ಲದೆ ಬೆಳೆಸಿ ಬಳಸಬಹುದಾದ ದಾಸವಾಳ.ದಾಸವಾಳದಲ್ಲಿ ಹಲವು ಬಣ್ಣಗಳಿವೆ.ಅದರಲ್ಲಿ ಬಿಳಿ ದಾಸವಾಳ ಎಲ್ಲಾ ರೋಗಕ್ಕೂ ಕಾರಣವಾದ ರಕ್ತ ಮಲಿನತೆ ನಿವಾರಿಸುವ ಗುಣ ಹೊಂದಿದೆ.ದಾಸವಾಳದ  ಎಲೆ ಮತ್ತು ಹೂವಿನಲ್ಲಿ ನೂರಾರು  ಬಗೆಯ ಆರೋಗ್ಯಕರ ಗುಣವಿದೆ. ದಾಸವಾಳದ ಹೂವಿನಲ್ಲಿ anti oxidants ಗುಣ ಅಧಿಕವಿದ್ದು ಈ ಹೂವನ್ನು ಇದರ ಎಲೆಗಳನ್ನು ಬಳಸಿ ಆರೋಗ್ಯ ವೃದ್ಧಿಸಬಹುದು.

ದಾಸವಾಳದ ನಿರಂತರ ಸೇವನೆಯಿಂದ, ಹಾಗೂ ಬಳಕೆಯಿಂದ ದೇಹದ ರಕ್ತ ಶುದ್ಧಿ, ಹೊಟ್ಟು ನಿವಾರಣೆ, ಕಾನ್ಸೆರ್ ತಡೆಗಟ್ಟುವಿಕೆ, ಹೆಂಗಸರ ಮುಟ್ಟಿನ ಸಮಸ್ಯೆ ನಿವಾರಣೆ, ಶೀತ, ಕೆಮ್ಮು, ತಲೆನೋವುಗಳ ಉಪಶಮನ, ಶುಕ್ರವುದ್ದಿ, ಹೃದಯ ಸಂಬಂಧಿ ತೊದರೆ ನಿವಾರಣೆ, ಬೊಜ್ಜು ಕರಗುವಿಕೆ ಮುಂತಾದ  ಪ್ರಯೋಜನ ಪಡೆಯಬಹುದು.

ಬಳಸುವ ಸರಳ ವಿಧಾನ:

ನಾವು ನಿತ್ಯ ಮಾಡುವ ಇಡ್ಲಿ, ದೋಸೆ, ಕಡುಬು ಇತ್ಯಾದಿ ಖಾದ್ಯಕ್ಕೆ ಅಕ್ಕಿ ರುಬ್ಬುವಾಗ ಅದರಲ್ಲಿ ದಾಸವಾಳದ ಸೊಪ್ಪು, ಇದ್ದರೆ ಹೂವು ಕೂಡ ಚೆನ್ನಾಗಿ ತೊಳೆದು ಹಾಕಿ ರುಬ್ಬಿ ಇಡ್ಲಿ, ದೋಸೆ, ಕಡುಬು ಮಾಡಿ ಸೇವಿಸುವುದು ಸುಲಭ ಹಾಗೂ ಸರಳ ವಿಧಾನ.
ಎಲೆ, ಹೊವು ಯಾ ಬೇರಿನ  ಕಷಾಯ ಮಾಡಿ ಕುಡಿಯುವುದು.
ಸೊಪ್ಪು ಮತ್ತೆ ಹೂವು ಅರೆದು ತಲೆಗೆ ಹಾಕಿ ಎರಡು ಮೂರು ತಾಸು ಬಿಟ್ಟು ಮಿಯುವುದು.

ಇಂತಹ ಗಿಡ ಮೂಲಿಕೆಗಳನ್ನು ನಿರಂತರ ಬಳಸಿದರೆ ವೈದ್ಯರಿಗೆ ಚೆಲ್ಲುವ ಸಾವಿರಾರು ರೂಪಾಯಿ ಉಳಿಸಬಹುದು. ಜಮೀನಿಲ್ಲದವರಿಗೆ ಬೆಳೆಸಿ ಒದಗಿಸಲು ರೈತರಿಗೆ ಪ್ರೋತ್ಸಾಹಿಸಿ, ಆಸ್ಪತ್ರೆಗೆ ಚೆಲ್ಲುವ ಹಣದ ಒಂದಿಷ್ಟು ಪಾಲು ರೈತರಿಗೆ ಚೆಲ್ಲಿ ಅವರಿಂದ ಬೆಳೆಸಿ, ಖರೀದಿಸಿ, ಬಳಸಿ  ಆರೋಗ್ಯವಂತರಾಗಿ ಬದುಕ ಕಟ್ಟಿ ಬದುಕೋಣ.

ಶ್ರೀನಿವಾಸ್ ಪ್ರಭು
ಸ್ಪೂರ್ತಿ, ಬಂಟಕಲ್ಲು


1 comment:

  1. ತಮ್ಮ ಈ ಮಾಹಿತಿ ಧಾರವಾಹಿಯನ್ನು ಮುಂದುವರೆಯಲಿ.
    ನನ್ನ ಹಿತ್ತಲಿನ ದಾಸವಾಳದ ಔಷದೀಯ ಗುಣಗಳನ್ನು ಈಗ ನಾನು ಅರ್ಥ ಮಾಡಿಕೊಂಡಂತಾಯಿತು.

    ReplyDelete