ನಾಡು-ನುಡಿ
ದಕ್ಷಿಣ ಕನ್ನಡ ಹಾಗೂ ಉತ್ತರ
ಕನ್ನಡದ ಹೆಸರು ಬದಲಾವಣೆಗೆ ಬುದ್ದಿ ಜೀವಿಗಳ ಒತ್ತಾಯ... ಸುದ್ದಿ.
ಕರ್ನಾಟಕವೂ ಒಂದೆ, ಕನ್ನಡವೂ ಒಂದೆ. ಆದರೆ ಗ್ರಾಮೀಣ ಕನ್ನಡದಲ್ಲಿ ಹಲವು ಬಗೆ. ಪ್ರತಿಯೊಂದು ಜಿಲ್ಲೆಯ ಜನರ ಆಡು-ನುಡಿಯಲ್ಲಿ
ನಾಡು-ನುಡಿಯೋಟ್ಟಿಗೆ ಸ್ಥಳೀಯ ಸಾಂಸ್ಕೃತಿಕ ಬಣ್ಣದ ಸೊಗಡು ಸೇರಿ ಭಾಷಾ
ವೈವಿದ್ಯತೆ ಕಂಡು ಬರುತ್ತದೆ. ಅದೇ ರೀತಿ, ಕರಾವಳಿ ಕನ್ನಡದಲ್ಲಿ ಎರಡು ವಿಧ.
ಒಂದು ದಕ್ಷಿಣ ಕನ್ನಡದ ‘ಕನ್ನಡ’ ಇನ್ನೊಂದು ಉತ್ತರ ಕನ್ನಡದ ‘ಕನ್ನಡ’. ದಕ್ಷಿಣ ಕನ್ನಡದ ಜನ ಶುದ್ದ ಕನ್ನಡದ ಬಳಕೆ ಮತ್ತು ಉತ್ತರ ಕನ್ನಡದಲ್ಲಿ ಹಳೇಕನ್ನಡದ ಬಳಕೆ.
ಇವೆರಡರ ಗುರುತಿಸುವಿಕೆಗಾಗಿಯೇ ಕರಾವಳಿ ಕರ್ನಾಟಕದಲ್ಲಿ “ಉತ್ತರ ಕನ್ನಡ” ಹಾಗೂ “ದಕ್ಷಿಣ ಕನ್ನಡ” ಎಂಬ ನಾಮ ಹುಟ್ಟಿದ್ದು. ಇದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬುದಾಗಿ ಅಲ್ಲ. ಹಾಗಾಗಿ ನಾಮ ಬದಲಾವಣೆಯಿಂದ ಈ ಎರಡು ಕನ್ನಡಗಳ ಕೊಲೆ
ಮಾಡಿದಂತಾಗುತ್ತದೆ. ಹಿಂದಿನ ಹೆಸರುಗಳನ್ನು ಬದಲಾಯಿಸುದಕ್ಕಿಂತ ಈ ಹೆಸರುಗಳು ಹುಟ್ಟಿ ಬಂದ ಬಗ್ಗೆ ಸಂಶೋಧನೆ ಮಾಡಿ ಅದನ್ನು ಮುಂದಿನ ಪೀಳಿಗೆಯ ಜನರಿಗೆ ತಿಳಿಯ ಹೇಳುವುದು ಬುದ್ದಿ
ಜೀವಿಗಳು ಮಾಡಬೇಕಾದ ಮೊದಲ ಕರ್ತವ್ಯವಾಗಬೇಕೆ
ಹೊರತು, ಹೆಸರನ್ನೇ ಬದಲಾಯಿಸಿ ಬಿಡುವುದರಿಂದ ನಮ್ಮ ನಾಡು-ನುಡಿ ಬೆಳೆದು ಬಂದ ಪರಿ ಮತ್ತು ಅಲ್ಲಿನ
ಸಾಂಸ್ಕೃತಿಕ ಸೊಗಡು ಮುಂದಿನ ಪೀಳಿಗೆಗೆ ತಿಳಿಯದೇ
ಹೋಗುವಂತಾಗಬಹುದು. ಹಾಗಾಗಿ ಈಬಗ್ಗೆ ಇನ್ನೊಮ್ಮೆ ಬುದ್ದಿ
ಜೀವಿಗಳು ಚಿಂತನೆ ಮಾಡುವ ಅಗತ್ಯತೆ
ಕಂಡು ಬರುವುದಿಲ್ಲವೇ? ಉತ್ತರ
ಕನ್ನಡ ಮತ್ತು ದಕ್ಷಿಣ ಕನ್ನಡ ಅಳಿಯದಿರಲಿ ಬದಲಾಗಿ ಬೆಳೆದು ಬಾಳಲಿ - ಶುಭವಾಗಲಿ.
ಸ್ಫೂರ್ತಿ
ಬಂಟಕಲ್ಲು,
28.09.2012
ಬಂಟಕಲ್ಲು,
28.09.2012
No comments:
Post a Comment