Monday, September 16, 2013

ನಿಟ್ಟುಸಿರು

 
ಬಾನಂಗಳದಿ,
ಕಾರ್ಮೋಡ ಮುಸುಕಿ,
ತಂಗಾಳಿಯೊಡನೆ 
ಬೆಸೆದ ಸುಖದಿಂ-
ಸ್ಕಲಿತ,
ಎರಡು ನೀರ
ಹನಿಗಳು, 
ಭುವಿಯಂಗಳದಿ
ಪ್ರಕೃತಿ ಚೆಲ್ಲಿದ
ಬೀಜಗಳ ಮೇಲುದುರಿ,
ಬಸುರಾಗಿ, ಹಸಿರ
ಉಸಿರು ಬಿಟ್ಟಾಗ,
ರೈತನೋಡಲು ತಣಿದು,
ದನ-ಕರು,
ಮೂಕ ಪ್ರಾಣಿಗಳ
ಮುಖವನೊಮ್ಮೆ ನೋಡಿ
ಬಿಟ್ಟ ಉಸಿರು!

ಸ್ಪೂರ್ತಿ
ಬಂಟಕಲ್ಲು

1 comment:

  1. ಅಬ್ಬಾ ಒಂದು ಆವರ್ತದಿಂದ ಎನಿತು ಜೀವನ!

    ReplyDelete