Saturday, January 12, 2013

ಅರ್ಹತೆ.












ಬಂಡೆಕಲ್ಲನೊಡೆದು,
ಒಡಕು-ಬಿರುಕಿಲ್ಲದ
ತುಂಡನಾಯ್ದು,
ಅಂಗುಲಾಂಗುಲಳೆದು,
ಅಜ-ಗಜ-ಧ್ವಜಗಳೆಂಬ
ಆಯವನು ಕೊಟ್ಟು,
ಆಯ-ವ್ಯಯ
ಪರಿಮಿತಿಗಳೊಳಗೆ,
ಶಿಲ್ಪಿ,
ಕೆತ್ತಿ ಕೆರೆಯುವಾಗಲೆಲ್ಲ;
ಕಲ್ಲಿಗೆ
ನೋಯುವುದಾದರೆ,
ಸುಂದರ
ಮೂರ್ತಿಯಾಗಿ
ಪೂಜಾರ್ಹತೆ
ಪಡೆಯುವುದಾದರೂ
ಹೇಗೆ?

                                   ಸ್ಪೂರ್ತಿ
                                   ಬಂಟಕಲ್ಲು
                                 
  

No comments:

Post a Comment