ಚಿಮಿಣಿ ದೀಪ
ನನ್ನ ಕನಸಿನ ಲೋಕ
Saturday, January 12, 2013
ಅರ್ಹತೆ.
ಬಂಡೆಕಲ್ಲನೊಡೆದು,
ಒಡಕು-ಬಿರುಕಿಲ್ಲದ
ತುಂಡನಾಯ್ದು,
ಅಂಗುಲಾಂಗುಲಳೆದು,
ಅಜ-ಗಜ-ಧ್ವಜಗಳೆಂಬ
ಆಯವನು ಕೊಟ್ಟು,
ಆಯ-ವ್ಯಯ
ಪರಿಮಿತಿಗಳೊಳಗೆ,
ಶಿಲ್ಪಿ,
ಕೆತ್ತಿ ಕೆರೆಯುವಾಗಲೆಲ್ಲ;
ಕಲ್ಲಿಗೆ
ನೋಯುವುದಾದರೆ,
ಸುಂದರ
ಮೂರ್ತಿಯಾಗಿ
ಪೂಜಾರ್ಹತೆ
ಪಡೆಯುವುದಾದರೂ
ಹೇಗೆ?
ಸ್ಪೂರ್ತಿ
ಬಂಟಕಲ್ಲು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment