Tuesday, December 11, 2012

ರಾದ್ದಾಂತ



ಪ್ರೇಮ ಪತ್ರ












ಪ್ರೇಮ ಕವಿಯ ಒಂದು ಕವನ
ಪ್ರೀತಿ ರಾಣಿ ಕೈಯ ಸೇರಿ
ಗಲ್ಲಿ ಗಲ್ಲಿಯಲ್ಲಿ
ಭಾರಿ  ಸುದ್ದಿಯಾಯಿತು
ರಾದ್ದಾಂತವಾಯಿತು.

ನನ್ನ ರಾಣಿ ನೀನು ಚೆಂದ
ನಿನ್ನ ರಾಜ ನಾನು ಎಂದ
ಕವಿಯ ವಾಣಿ ಕೇಳಿ
ಜನರ ಕೋಪ ಉರಿಯಿತು.

ನೀನೊಂದು ಹೂವಿನಂತೆ
ಬರುವೆ ನಾನು ದುಂಬಿಯಂತೆ
ಎಂಬೆರಡು ಸಾಲು ಜನರ
ಕಿವಿಯ ತಟ್ಟಿತು.

ನಿನ್ನ ಹೃದಯ ಹಾಲಿನಂತೆ
ನನ್ನ ಹೃದಯ ಜೇನಿನಂತೆ
ಎಂಬ ಎರಡು ಕೊಂಡಿ ಅದಕೆ
ಸೇರಿಕೊಂಡಿತು.

ಪ್ರೇಮ ಕವಿಯ ಕವನ ಓದಿ
ಕಾವೇರಿ ಕುಪಿತ ಮಂದಿ
ದೊಳು ಗುದ್ದಿ ಜನರ
ಕಿವಿ ತಮಟೆ ಒಡೆದರು.

ಪ್ರೇಮ ಕವನ ಓದಿಕೊಂಡು
ಹದಿ ಹರೆಯ ಪುಳಕಗೊಂಡು
ಚಿಗುರುಮೀಸೆ ತಿರುವಿಕೊಂಡು
ತುಂಟರಾದರು!
ಕವಿಯ ಬಂಟರಾದರು.

                               ಸ್ಪೂರ್ತಿ
                                ಬಂಟಕಲ್ಲು
                                12.12.12

                   

No comments:

Post a Comment