ಶ್ರೀ ಕೃಷ್ಣನ
ಹುಟ್ಟಿನ ಹಿಂದೆ..
ಕೃಷ್ಣ ಹುಟ್ಟದಿದ್ದರೆ ಏನಾಗುತ್ತೋ ಅದು
ಬೇರೆ ವಿಚಾರ,
ಕೃಷ್ಣ ಹುಟ್ಟಿದ್ದರಿಂದ ನಮಗೊಂದು
ಪಾಠವಾಯಿತು,
ಕಥೆ, ಕವನ, ಕಾದಂಬರಿಗೊಂದು ದಾರಿಯಾಯಿತು,
ಸುಖ ಕಷ್ಟಗಳೇನೆಂಬುದರ ಗೋಚರವಾಯಿತು,
ನೊಂದ ಮನಸ್ಸುಗಳಿಗೊಂದು ಹಬ್ಬ-ಹರಿದಿನವಾಯಿತು,
ಜೂಜು - ಜುಗಾರಿಗಳೇನೆಂಬುದರ ಅರ್ಥವಾಯಿತು.
ಜಾಗೃತ ಮನಸ್ಸಿಗೆ ಬಂದೀಖಾನೆಯ ಪರಿಚಯ ವಾಯಿತು,
ಸುರಿಯುವ ಮಳೆ ಪ್ರವಾಹ ಪ್ರಳಯಗಳ ಭಯವೂ ಹುಟ್ಟಿತು,
ಜ್ಞಾನ - ಜಾಗೃತಿ ಗಳೆಂಬ ಶಭ್ದಗಳ
ಹುಟ್ಟಿಗೂ ಕಾರಣವಾಯಿತು.
ಪ್ರೀತಿ-ಪ್ರೇಮ, ಆಟ-ಚೆಲ್ಲಾಟಗಳಿಗೊಂದು
ಹೂದೋಟದ ಸೃಷ್ಟಿಯಾಯಿತು,
ಸರಸ-ಸಲ್ಲಾಪ, ರಸ-ನವರಸಗಳಿಗೆ ಶ್ರುತಿ ಮೀಡಿ ಸಂಗೀತ ವಾಯಿತು,
ಸ ರಿ ಗ ಮ ಪ ದ ನಿ (ಸ) ಗಳೆಂಬ ಸಪ್ತ
ಸ್ವರ ಸೃಷ್ಟಿಯ ಪುಷ್ಟಿಕೊಟ್ಟಿತು.
ಸ್ಪೂರ್ತಿ
ಬಂಟಕಲ್ಲು
No comments:
Post a Comment